ಮಂಡ್ಯ:ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಶೇ.೧೩ರಷ್ಟು ಮಂದಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ ಹೇಳಿದರು.
ನಗರದ ಮಾಂಡವ್ಯ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯದಲ್ಲಿ ೧೮ ಲಕ್ಷಕ್ಕೆ ಶೇ.೧೩ರಷ್ಟು ಮಂದಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ೪ ಲಕ್ಷ ಜನ ಬಳಲುತ್ತಿದ್ದಾರೆ, ಹಿಂದೆಯಲ್ಲಾ ಹೃದಯಘಾತ ಇರಲ್ಲೇ ಇಲ್ಲ,ಯಾರೋ ಒಬ್ಬರಿಗೆ ಹೃದಯಬೇನೆಯ ಅಘಾತ ಆಗುತ್ತಿತ್ತು,ಈವಾಗ ಆತರ ಇಲ್ಲ, ೪೦-೫೦ ವರ್ಷಕ್ಕೆ ಹೃದಯಘಾತ ಆಗುತ್ತಿದೆ, ಕ್ಯಾನ್ಸರ್, ಮಧುಮೇಹ ತುಂಬ ವಿರಳವಿತ್ತು ಈಗ ಹೆಚ್ಚಳವಾಗಿದೆ ಎಂದು ನುಡಿದರು.
ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಡಯಲಿಸಿಸ್ ಕೇಂದ್ರಗಳನ್ನು ಮಾಡಲಾಗಿದೆ,ಜನರ ಅಹಾರಪದ್ದತಿ,ಜೀವನ ಶೈಲಿ ಬದಲಾಗುತ್ತಿದೆ,ಆರೋಗ್ಯ ಹದಗೆಡುತ್ತಿದೆ,ಹಿಂದೆಯೆಲ್ಲಾ ಮನೆಮಂದಿಗೆ ತರಕಾರಿ,ಸೊಪ್ಪು, ಅಗತ್ಯವಸ್ತುಗಳನ್ನು ಬೆಳೆದು
ಕೊಳ್ಳುತ್ತುದ್ದರು,ದುಡಿಯುತ್ತಿದ್ದರು, ಆದರೆ ಈಗ ಹಳ್ಳಿಮಂದಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವ ಜೀವನಶೈಲಿಗೆ ಬಂದಿದ್ದೇವೆ ಎಂದು ಎಚ್ಚರಿಸಿದರು.
ಬಳಿಕ ಮಾತನಾಡಿದ ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು,ವಿಶ್ವ ಆರೋಗ್ಯ ಸಂಸ್ಥೆಯು ೨೦೨೩ರ ವರ್ಷವನ್ನು ಸುವರ್ಣ ಸಂಭ್ರಮವನ್ನಾಗಿ ಆಚರಿಸುತ್ತಿದೆ, ಎಲ್ಲರಿಗೂ ಆರೋಗ್ಯ ಎಂಬ ಘೋಷವಾಕ್ಯವನ್ನು ನೀಡಿದೆ, ಇಂದಿನಿಂದಲಾದರೂ ಎಲ್ಲಾವನ್ನು ಹಿತ ಮಿತವಾಗಿ ಬಳಸುವುದರಿಂದ ಆರೋಗ್ಯ ಸಂಪತ್ತು ವೃದ್ದಿಸುತ್ತಿದೆ ಎಂದು ಸಲಹೆ ನೀಡಿದರು.
ಪೂರ್ವಿಕರ ಆಹಾರ ಪದ್ದತಿ, ದುಡಿಮೆ,ಮನುಷ್ಯನಿಗೆ ತುಂಬ ಅರೋಗ್ಯವನ್ನು ಹೆಚ್ಚಿಸುತ್ತದೆ, ಇಂದಿನ ಜನತೆ ಎಲ್ಲವನ್ನು ಕುಳಿತಲ್ಲೆ ಮಾಡಿಕೊಳ್ಳುತ್ತಿದ್ದಾರೆ,ದುಡಿಮೆ ಬಿಟ್ಟು ಖರೀದಿಯಲ್ಲಿದ್ದಾರೆ, ಅರೋಗ್ಯಕಡೆ ಗಮನವಿಲ್ಲದೆ ಒತ್ತಡದ ಜೀವನದಲ್ಲಿ ಬದುಕು ಸಾಗಿಸುತ್ತಿದ್ದಾರೆ,ಇನ್ನಾದರೂ ಆರೋಗ್ಯದ ಬಗ್ಗೆ ಜಾಗೃತಿ,ದುಡಿಮೆ ಮಾಡುವುದು ಉತ್ತಮ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ಕ್ರಾಸ್ ಜಿಲ್ಲಾ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಮಾತನಾಡಿ,ಇಂದಿನ ಕಾಲಘಟ್ಟದಲ್ಲಿ ಅಜ್ಜಿ-ಅಜ್ಜಂದಿರೇ ಮಕ್ಕಳು ಮೊಮ್ಮಕ್ಕಳನ್ನು ಆಸ್ಪತ್ರೆಗೆ ವೈದ್ಯರ ಬಳಿಗೆ ಕರೆತರುವ ದಿನಗಳು ಬಂದಿವೆ, ಹಿಂದೆಯೆಲ್ಲಾ ಅಜ್ಜ-ಅಜ್ಜಿಯರನ್ನು ಆಸ್ಪತ್ರೆಗೆ ಕರತರುವುದು ವಾಡಿಕೆಯಾಗಿತ್ತು ಈಗ ಉಲ್ಟ ಪಲ್ಟ ಆಗಿದೆ ಎಂದು ನುಡಿದರು.
ಇಂದಿನ ಯುವಜನತೆ ಆರೋಗ್ಯದ ಕಾಳಿಜಿ ಹೆಚ್ಚಿಸಿಕೊಳ್ಳಬೇಕು ಇತರರಿಗೂ ಅರಿವು ಮೂಡಿಸುವ ಕಾರ್ಯದಲ್ಲಿ ತಮ್ಮಕೊಡಗೆ ನೀಡಬೇಕಿದೆ ಎಂಬ ಸಂದೇಶ ಸಾರಲು ಇಂತಹ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸ
ಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವೀಪ್ ಜಿಲ್ಲಾ ಸಮಿತಿ ಆಯೋಜಿಸಿದ್ದ ಮತದಾನದ ಅರಿವು ಮತ್ತು ಜಾಗೃತಿ ಅಭಿಯಾನದಲ್ಲಿ ಕಡ್ಡಾಯವಾಗಿ ಮಾತದಾನ ಮಾಡುವ ಪ್ರಮಾಣ ವಚನ ಸ್ವೀಕರಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಡಾ.ವೇಣುಗೋಪಾಲ್, ಉಪ ಅಧಿಕಾರಿ ಬಿ.ಶಿವಾನಂದ, ರೆಡ್ಕ್ರಾಸ್ನ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಮತ್ತಿತರರಿದ್ದರು.
ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ:ಡಾ.ಧನಂಜಯ
Leave a comment