ಮೈಸೂರು: ನಗರದ ವಿದ್ಯಾರಣ್ಯಪುರಂ 2ನೇ ಮುಖ್ಯರಸ್ತೆ 3ನೇ ಅಡ್ಡರಸ್ತೆಯಲ್ಲಿ ವಿನಾಯಕ ಗೆಳೆಯರ ಬಳಗದ ಆಶ್ರಯದಲ್ಲಿ ಜರುಗಿದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಕಾಂಗ್ರೆಸ್ ಮುಖಂಡ ಕುಮಾರ್( ಕುಮ್ಮಿ), ಗೌತಮ್( ಬುಜ್ಜಿ ), ರವಿಶಂಕರ್, ವಿನಯ್ ಕುಮಾರ್, ವಸಂತ ನಾಯಕ್, ಗೃಹಶೋಭೆ ಕೃಷ್ಣ, ಪ್ರತಾಪ್ ರಾವ್(ಗಣೇಶ್), ಶೇಖರ್, ಶಂಕರ್, ನಾಗರಾಜು, ಸುನಿಲ್, ರವಿ ಶಿವಕುಮಾರ್, ಹರೀಶ್, ಅಪ್ಪು ಮತ್ತಿತರರು ಪಾಲ್ಗೊಂಡಿದ್ದರು.